ಮೂಡುಬಿದಿರೆ: ಮಾರ್ಪಾಡಿ-ಕಲ್ಲಬೆಟ್ಟುವಿನ ನಡ್ಯೋಡಿ ದೈವಸ್ಥಾನದ (Nadyodi Daiwasthana) ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಆನಂದ ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ವಿಶ್ವನಾಥ ಕೋಟ್ಯಾನ್ (Vishwanath Kotyan) , ಉಪಾಧ್ಯಕ್ಷರಾಗಿ ನಾಗೇಶ್ ಕೋಟ್ಯಾನ್, ಗಂಗಾಧರ ಪೂಜಾರಿ, ಖಜಾಂಚಿಯಾಗಿ ಸುಧೀಶ್ ಹೆಗ್ಡೆ (Sudhish Hegde as Treasurer), ಜತೆ ಕಾರ್ಯದರ್ಶಿಗಳಾಗಿ ಪದ್ಮನಾಭ ಸಾಲ್ಯಾನ್ ಹಾಗೂ ಶರತ್ ಮದ್ರೊಟ್ಟು ಅವರು ಆಯ್ಕೆಯಾಗಿದ್ದಾರೆ.
ಇದನ್ನ ಓದಿ: ನಾಲ್ಕನೇ ವೈದಿಕ್ ಪ್ರೀಮಿಯರ್ ಲೀಗ್ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡಕ್ಕೆ ವಿಪಿಎಲ್ 2023 ಟ್ರೋಫಿ
ನಿರ್ಗಮನ ಅಧ್ಯಕ್ಷ ಕೃಷ್ಣ ಕೋಟ್ಯಾನ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಆಡಳಿತ ಮೊಕ್ತೇಸರ ಎಂ ವಸಂತ ಶೆಟ್ಟಿ, ನಿರ್ಗಮನ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.