News Karnataka
ಸಮುದಾಯ

ಬಂಟ ಸಮುದಾಯದವರಿಗೆ ದೇವರೇ ಗುರು: ಕೇಮಾರು ಶ್ರೀ

God is guru for bants community Says kemaru shree Swamiji
Photo Credit : News Karnataka

ಮೂಡುಬಿದಿರೆ: ಬಂಟ ಸಮುದಾಯ(Bunts samuday)ವು ಪರೋಪಕಾರ ದಂತಹ ದೊಡ್ಡ ಗುಣವನ್ನು ಹೊಂದಿದೆ. ಗುರುಪೀಠವಿಲ್ಲದೇ ಬಂಟ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಇಂದು ಪ್ರಗತಿ ಸಾಧಿಸಿದೆ, ಸಮುದಾಯದ ಹಿರಿಯರು ಗುರುಪೀಠಕ್ಕೆ ಹೋರಾಡದೆ ಬಂಟರ ಸಂಘ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದರೆ ಸಮುದಾಯದ ಅಭಿವೃದ್ಧಿ ಸಾಧ್ಯ. ಈ ಸಮುದಾಯವು ಗುರುಪೀಠಕ್ಕೆ (Gurpeeta) ಹೆಚ್ಚಿನ ಆದ್ಯತೆ ನೀಡದೆ ಹಿರಿಯರು ತೋರಿದ ಹಾದಿಯಲ್ಲೇ ಮುಂದೆ ಸಾಗಬೇಕು, ದೇವರನ್ನೇ ಗುರುವನ್ನಾಗಿ ಕಾಣಬೇಕು ಎಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ನುಡಿದರು.

ಅವರು ಮೂಡುಬಿದಿರೆ ಯುವ ಬಂಟರ ಸಂಘದ ವತಿಯಿಂದ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸ್ವಾಮೀಜಿಯವರು ಸಂಸ್ಕೃತಿ,ಶಿಕ್ಷಣ, ಉದ್ಯಮ,ಧಾರ್ಮಿಕ, (Culture, Education, Industry, Religious,) ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಬಂಟ ಸಮುದಾಯದ ಕೊಡುಗೆ ದೊಡ್ಡದು, ಇದು ಬಂಟ ಸಮುದಾಯದ ಹೆಮ್ಮೆ ಎಂದರು.

ಆಧ್ಯಾತ್ಮವೆಂದರೆ ಕೇವಲ ಗುಡಿ ಗೋಪುರಗಳನ್ನು ಕಟ್ಟುವುದಲ್ಲ, ಯಾರು ಹಸಿದವರಿರುತ್ತಾರೋ,ಯಾರು ಕಷ್ಟದಲ್ಲಿ ಇರುತ್ತಾರೋ ಅಂತವರಿಗೆ ನೆರವಾಗುವುದೇ ಶ್ರೇಷ್ಠವಾದ ಆಧ್ಯಾತ್ಮವೆಂದು ಹೇಳಿದ ಅವರು ಬಂಟ ಸಮುದಾಯವು ಎಲ್ಲ ಸಮುದಾಯದವರೊಂದಿಗೂ ಬೆರೆತುಕೊಂಡು,ಸರ್ವಧರ್ಮೀಯರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕೆಂದರು.

ಇದನ್ನ ಓದಿ: ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಶಸ್ತಿ ಪ್ರದಾನ

ನ್ಯಾಯವಾದಿಗಳಾದ(A lawyer) ಚೇತನ್ ಕುಮಾರ್ ಶೆಟ್ಟಿ, ನಾಗೇಶ್ ಶೆಟ್ಟಿ, ಉದ್ಯಮಿ ತೋಡಾರು ದಿವಾಕರ ಶೆಟ್ಟಿ ,ಸುಕೇಶ್ ಶೆಟ್ಟಿ ಶಿರ್ತಾಡಿ, ಪ್ರೇಮನಾಥ ಮಾರ್ಲ, ಮಿಥುನ್ ಶೆಟ್ಟಿ, ವಂದನಾ ರೈ ಕಾರ್ಕಳ, ಭೋಜ ಶೆಟ್ಟಿ, ಕುಮಾರ್ ಶೆಟ್ಟಿ ಇರುವೈಲು, ಯುವ ಬಂಟರ ಸಂಘದ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಭರತ್ ಶೆಟ್ಟಿ ಇರುವೈಲು, ಪದಾಧಿಕಾರಿಗಳು ಉಪಸ್ಥಿತರಿದ್ದರು.

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *